Tuesday 1 April 2014

GIST OF SHREEMADBHAGAVATGEETA

                                       ಶ್ರೀಮದ್ಭಗವದ್ಗೀತಾ ತಾತ್ಪರ್ಯ -- ಪ್ರಥಮೋಧ್ಯಾಯಃ |
೧೮ ಅಧ್ಯಾಯಗಳುಳ್ಳ ೭೦೦ ಶ್ಲೋಕಗಳನ್ನು ಒಳಗೊಂಡ ಶ್ರೀಮದ್ಭಗವದ್ಗೀತೆಯು  --  " ನನ್ನವರು ಮತ್ತು ಪಾಂಡವರು"  ಧರ್ಮ ಕ್ಷೇತ್ರವೆನಿಸಿದ ಈ ಕುರುಕ್ಶೇತ್ರದಲ್ಲಿ ಏನು ಮಾಡಿದರು ?- ಎಂಬ ದೃತರಾಷ್ಟ್ರ ನ ಪ್ರಶ್ನೆ ಗೆ ಸಂಜಯನ ಉತ್ತರದೊಂದಿಗೆ ಮೊದಲುಗೊಳ್ಳುತ್ತದೆ | ಸಂಜಯನು ಉತ್ತರಿಸುತ್ತಾ ಹೀಗನ್ನುತ್ತಾನೆ -- ೧. ದುರ್ಯೋಧನನು ಪಾಂಡವರ ೭ ಅಕ್ಷೋಹಿಣೀ ಸೇನೆಯ ಒಂದು ತುಣುಕಾದ "ಅನೀಕಿನೀ "  ಯನ್ನು ಅವಲೋಕಿಸುತ್ತಾ ತನ್ನ ಗುರು ಆಚಾರ್ಯ ದ್ರೋಣನೆಡೆಗೆ ಬಂದು ರಾಜ ದರ್ಪದಿಂದ ಕೂಡಿದ ಚೇಷ್ಟೆಯಿಂದ ಹೀಗೆಂದನು -- ಹೇ ಆಚಾರ್ಯ ನಿನ್ನ ಶಿಷ್ಯ . ದೃಷ್ಟದ್ಯುಮ್ನನಿಂದ ರಚಿಸಲ್ಪಟ್ಟ ವ್ಯೂಹವನ್ನು ಭೀಮನು ರಕ್ಷಿಸುತ್ತಿದ್ದಾನೆ | ಅಲ್ಲಿ ಅತ್ಯಂತ ಶ್ರೇಷ್ಟ ಬಿಲ್ಲುಗಾರರೂ ಯುದ್ಧದಲ್ಲಿ ಭೀಮಾರ್ಜುನರಿಗೆ ಸಮವಾದ ಅನೇಕ ಶೂರರೂ ಇದ್ದಾರೆ ಎನ್ನುತ್ತಾ ಯುಯುಧಾನ ವಿರಾಟರಿಂದ  ಮೊದಲು ಮಾಡಿ ೫ ಜನ ಪಾಂಡವ ಪುತ್ರರಾದ "ದ್ರೌಪದೇಯ" ರ ತನಕ ೧೮ ಹೆಸರುಗಳನ್ನು ಉಸುರಿದನು | ಆದರೂ ಶ್ರೀಕೃಷ್ಣ ನನ್ನೇ ಮರೆತುದು ಗಮನಾರ್ಹ | ಆ ಮೇಲೆ ಪಾಂಡವರ ಸೈನ್ಯವು ಸಂಖ್ಯೆಯಲ್ಲಿ ಮಿತವಾಗಿದ್ದರೂ - ಸಾಕಷ್ಟು  ಸಮರ್ಥವಾಗಿದೆ (ಪರ್ಯಾಪ್ತಂ) ಎಂಬ ರೀತಿಯಲ್ಲಿ ಹೇಳಿಕೊಂಡನು |
 ೨. ಹಾಗೆಯೇ ಭೀಷ್ಮ ನಿಂದ ರಕ್ಷಿಸಲ್ಪಟ್ಟ ತನ್ನ ಸೇನೆಯು ಸಾಕಷ್ಟಿದ್ದರೂ ಪೂರ್ಣ ಸಾಮರ್ತ್ಯದ  ನ್ಯೂನತೆಯೂ ಇದೆ (ಅಪರ್ಯಾಪ್ತಂ)  ಎಂಬಂತೆ ಗೊಣಗಿದನು | ಮುಂದೆ ಭೀಷ್ಮ ದ್ರೋಣಾದಿ ಗಳನ್ನೂ ಸೇರಿ  ೭ ಮಂದಿ ತನಗೆ ಪೂರ್ಣ ನಿಷ್ಟೆ ಯನ್ನು ತೋರಲು ಸಾಧ್ಯವಾಗದ ವಿವಶತೆಯನ್ನು ಹೊಂದಿದವರ ಹೆಸರುಗಳನ್ನು ಆಚಾರ್ಯರ ಮುಂದೆ ಅಣಕಿಸುವಂತೆ ಹೇಳಿಕೊಂಡನು  !- ಇದರೊಂದಿಗೆ ತನಗೆ ನಿಷ್ಟರಾಗಿ ತನಗಾಗಿ ಜೀವನವನ್ನೇ ತ್ಯಾಗ ಮಾಡಬಲ್ಲ ಬಹು ಮಂದಿ ಶೂರರೊ ಇದ್ದಾರೆ  ಎಂಬಂತೆ ಮಾತನಾಡಿದನು |
೩. ಆಗಲೇ ದುರ್ಯೋಧನನ ತಳಮಳ ವನ್ನು ಗಮನಿಸಿದ ಭೀಷ್ಮ ಪಿತಾಮಹರು ಸಿಂಹ ನಾದವನ್ನು ಮಾಡುತ್ತಾ ಯುದ್ಧದ ಪ್ರಾರಂಭಿಕ ಲಾಂಛನ ವೆಂಬಂತೆ  ಉಚ್ಛ ಸ್ವರದಲ್ಲಿ ಶಂಖ ನಾದವನ್ನು ಮಾಡಿದರು | ಒಡನೆಯೇ ಕೌರವ ಸೈನ್ಯವಿಡೀ ಅದೇ ಕ್ಷಣದಲ್ಲಿ -- ಶಂಖ, ಭೇರಿ, ಪಣವ, ಆನಕ -ಗೋಮುಖಾದಿ  ಸಕಲ  ವಾದ್ಯಗಳನ್ನೂ ದ್ವನಿ ಗೂಡಿಸಿ ಕರ್ಣ ಕಠೋರ ಭೀಷಣ ಧ್ವನಿ ಯ ಉತ್ಪತ್ತಿಗೆ ಕಾರಣವಾಯಿತು |
೪. ಅದಕ್ಕೆ ಪ್ರತಿಯಾಗಿ ಪಾಂಡವರಲ್ಲಿ - ಕ್ರಮಾಗತವಾಗಿ ಶಿಸ್ತು ಬದ್ಧ ವಾಗಿ ಶ್ರೀ ಕೃಷ್ಣನ ಪಾಂಚ ಜನ್ಯ ದಿಂದ ಆರಂಭವಾಗಿ ಎಲ್ಲ ಪಾಂಡವರೂ ಇತರ  ವೀರರೂ ಒಬ್ಬೊಬ್ಬರಾಗಿ  ಬೇರೆ ಬೇರೆಯಾಗಿ ತಮ್ಮ ತಮ್ಮ ಶಂಖಗಳ ಧ್ವನಿಗೂಡಿಸಿದರು - ಈ ದ್ವನಿಯು ಕೌರವರ ಎದೆ ಸೀಳುವಂತಿತ್ತು |  ಒಡನೆಯೇ ಅರ್ಜುನನು ತನ್ನ ರಥವನ್ನು ಎರಡು ಸೈನ್ಯಗಳ ಮಧ್ಯೆ ನಿಲ್ಲಿಸುವಂತೆ  ಶ್ರೀ ಕೃಷ್ಣ ನನ್ನು ಕೇಳಿದನು | ಶ್ರೀಕೃಷ್ಣನು ರಥವನ್ನು ಭೀಷ್ಮ ದ್ರೋಣ ರ ಸಮ್ಮುಖದಲ್ಲಿ ನಿಲ್ಲಿಸಿದನು |
  ೫. ಅಲ್ಲಿ ಪಿತಾಮಹ, ಆಚಾರ್ಯ, ಮಕ್ಕಳು, ಮೊಮ್ಮಕ್ಕಳು, ಮಿತ್ರರು ಹೀಗೆ ಎಲ್ಲಾ ತನ್ನವರನ್ನು ನೋಡಿ ಅರ್ಜುನನ ಮನ ಕದಡಿತು | ಮತ್ತು ಅವನು ಶ್ರೀ ಕೃಷ್ಣ ನೊಡನೆ ಇಂತೆಂದನು -- ಹೇ ಕೃಷ್ಣಾ ಈ ನನ್ನ ಬಾಂಧವರನ್ನು ನಾನು ಕೊಲ್ಲಲಾರೆ - ಈ ಗುರುಹಿರಿಯರನ್ನು ಕೊಂದು  ಪಡೆಯುವ ರಾಜ್ಯಕ್ಕಿಂತಲೂ ಭಿಕ್ಷಾನ್ನ ಜೀವನವೇ ಉತ್ತಮ ಎಂದು ನಾನು ತಿಳಿಯುವೆನು | ಹಾಗೆಯೇ ನಾನು ಶರೀರ ಸ್ಥಿಮಿತ ಕಳೆದುಕೊಳ್ಳುತ್ತಿದ್ದೇನೆ ನನ್ನ ಕೈಯಿಂದ ಗಾಂಢೀವವು ಜಾರುತ್ತಿದೆ ನನ್ನ ಚರ್ಮವೂ ಸುಡುತ್ತಿದೆ ಎಂದನು ಹಾಗೂ ಮೋಹಕ್ಕೊಳಗಾಗಿ ಚಡಪಡಿಸಿದನು |
೬. ಮುಂದೆ ಯುದ್ಧದಿಂದಾಗಬಹುದಾದ ಅನಾಹುತಗಳನ್ನು ಹೀಗೆಂದು ವಿವರಿಸಿದನು -- ಹೇ ಕೃಷ್ಣಾ - ಕುಲ ಕ್ಷಯ ಹಾಗೂ ಮಿತ್ರ ದ್ರೋಹ ಪಾತಕಗಳನ್ನು ನಾವು ನೋಡಲು ಶಕ್ತರಾಗಿದ್ದೇವೆ. --ಯಾಕೆ ನಾವು ಯುದ್ಧದಿಂದ ಹಿಂದೆಗೆಯಬಾರದು ? ಈ ದೋಷಗಳನ್ನು ಒಂದೊಂದಾಗಿ  ಹೀಗೆ ವಿವರಿಸಿದನು - ಕುಲಕ್ಷಯ  - ಇದರಿಂದ ಧರ್ಮ ನಾಶ - ಇದರಿಂದ ಅಧರ್ಮದ ಪ್ರಸರಣ - ಮುಂದೆ ಅಧರ್ಮ ಸ್ಫರ್ಶ ದಿಂದ ಕುಲ ಸ್ತ್ರೀಯರ ಪ್ರದೂಷಣ - ವರ್ಣ ಸಂಕರ - ಈ ವರ್ಣ ಸಂಕರವು ಕುಲ ನಾಶಕರಿಗೂ ಕುಲಕ್ಕೂ ನರಕ ಕಾರಕ - ಇದರಿಂದ ಇವರ ಪಿತೃಗಳೂ ಅಪರ ಕರ್ಮ ಮತ್ತು ಪಿಂಡಗಳಿಂದ ವಂಚಿತರಾಗಿ ಪಿತೃ ಲೋಕದಿಂದ ಕೆಳಕ್ಕೆ ಬೀಳುವರು | ಈ ಮೇಲಿನ ದೋಷಗಳಿಂದ ಕುಲನಾಶಕರ ಜಾತಿ ಧರ್ಮಗಳೂ -ಕುಲ ಧರ್ಮಗಳೂ ಶಾಶ್ವತವಾಗಿ ನಾಶ ಹೊಂದುವವು -- ಹೇ ಜನಾರ್ಧನಾ ಈ ರೀತಿ ಧರ್ಮ ನಾಶಕರಾದ ಮನುಷ್ಯರು ನಿಯತವಾಗಿ (ಶಾಶ್ವತಕ್ಕೆ ಸಮವಾಗಿ) ನರಕದಲ್ಲಿ ವಾಸಿಸ ಬೇಕಾಗುವುದು -- ಎಂದು ನಾವು ಕೇಳಿದ್ದೇವೆ  !!  -- ಆಹೋ -- ಈ ಮಹತ್ಪಾಪವನ್ನು ಮಾಡುವುದಕ್ಕೆ ನಾವು ಹೊರಟಿದ್ದೇವೆ - ಆಶಸ್ತ್ರ  ನಾದ ನನ್ನನ್ನು ಶಸ್ತ್ರ ಪಾಣಿಗಳಾದ ಇವರು ಕೊಂದರೂ ನನಗೆ ಕ್ಶೇಮಕರವೇ -- ಎಂದು ಹೇಳಿ - ಶರಗಳೊಂದಿಗೆ ಬಿಲ್ಲನ್ನೂ ತ್ಯಜಿಸಿ ರಥದ ಹಿಂಬಾಗದಲ್ಲಿ ಸುಮ್ಮನೆ ಕುಳಿತನು ||
ಆದರೆ ಆಚಾರ್ಯ ಶಂಕರರ ರ ಅಭಿಪ್ರಾಯದಂತೆ ಈ .ಜ್ಞಾನವು --  " ಶೋಕ ಮೊಹಾಭ್ಯಾಂ ಹಿ ಅಭಿಭೂತ ವಿವೇಕ ಜ್ಞಾನಃ "  - ಶೋಕ ಮೋಹಕ್ಕೊಳಗಾದ ರಾಗ ದ್ವೇಷಗಳಿಂದ ಕಲುಷಿತಗೊಂಡ ಚಿತ್ತ ದಿಂದ ಉದ್ಭವಿಸಿದ ಜ್ಞಾನ ವಾದುದರಿಂದ "ಮಿಥ್ಯಾ ಜ್ಞಾನ ವಾಗಿದೆ" -- ನಿಜ ಜ್ಞಾನವನ್ನು ಮುಂದೆ ಶ್ರೀ ಕೃಷ್ಣನೇ ಸ್ವತಃ ಹೇಳಲಿರುವನು ||  -- ಇತಿ ಪ್ರಥಮೋಧ್ಯಾಯಃ                         

Tuesday 25 March 2014

BHAJA GOVINDAM - Verse 15. -- Regarding Old age

अन्गम् गलितम् पलितम् मुण्डम् |
दशनविहीनम् जातम् तुँडम् |
वृद्धो याति गृहीत्वा दंडम् |
तदपि न मुन्चत्याशा पिंडम् ||  Verse-15

MEANINGS.--  ABOUT THE OLD AGE. -- Shreemad Achaarya Shankara.
1. All parts of the body becomes so poor that  they are fit for limited use only. 2. All hairs over the head have turned white and ripe.  3. All teeth have fallen 4. The tip of the face  got degenerated 5. This old man needs a walking stick to move.
6. STILL  HIS "BOILING DESIRES" DO  NEVER DIMINISH.
Our unity breaking politicians are the living example for this verse. 
BODY GROWS OLDER AND OLDER -- THE DESIRE GROWS YOUNGER AND YOUNGER   -- !!! -- I pity these betrayers of the National cause.
a). Their body alone grows and the mind and intellect never be elevated to be broad. b). Their mind is not at least broad enough to realize - which part of their body is still usable  c). That is only the  " BRAIN "  which can guide the younger generation.

Thursday 27 February 2014

SELF MANAGEMENT - Bhagavad Geeta - Quality of Action and Fruit of Action

कर्मणि एव अधिकारस्ते मा फलेषु कदाचन --
------मा ते सन्गोस्त्वकर्मणि || 2-47 ||

One has the right to act alone - But no right over the fruit of action. BUT THIS SHOULD NOT BE the reason for " INACTION/NOT TO ACT "
Neither it prohibits one from enjoying the fruit action at all !!!!
सर्वेषु कार्येषु मनोध्विघ्नता कर्मा फलाभीलाशानुपाति --The height of tension while performing any action is proportional to the depth of desire towards the FRUIT OF ACTION. 
 1. The excessive desire over the fruit of action will spoil the concentration of the mind over the duty to be performed to achieve this very fruit itself 
 2. It will spoil the quality of ACTION as the portion of "MIND ENERGY" is spent over the longing of the mind for the fruit action even before it is produced.

A forceful example for this is -- Many great CRICKETERS - GETTING OUT AT 95--- 99 etc. This is because of their mind more attached to the century -- THE FRUIT OF THIS FINAL ACTION --!!

HOW TO HANDLE THE “FRUIT OF ACTION” - WHICH FORCIBLY PULLS THE MIND - WHILE IN ACTION?


योगस्थः कुरु कर्माणि सन्गम् त्यक्त्वा धनंजय |सिध्यसिध्योः समो भूत्वा समत्वम् योग उच्यते  || 2-48 ||

Establish the "Self" in "Yoga" and act, detaching the mind from the "Fruit of action" -- Be balanced with loss or gain - Thus achieving the “EQUANIMITY " is called "YOGA" ||The meaning is self explanatory -- This may look difficult BUT not impossible !!! -- It is possible with long practice. (अभ्यास वैराग्याभ्यम् तन्निरोधः -- अभ्यासेन तु कौन्तेय --)